ಸಹಾಯದ ಅವಶ್ಯವಿರುವ ಜನ ಸಮೂಹಕ್ಕೆ ಸೇವೆ ನೀಡುವುದೇ ಮುಖ್ಯ ಗುರಿಯಾಗಲಿ – ರೊಟೇರಿಯನ್ ತಿರುಪತಿ ನಾಯ್ಡು**

ಕಿಷ್ಕಿಂದಪ್ರಭ ಸುದ್ದಿ ಗಂಗಾವತಿ: ನಮ್ಮ ಸುತ್ತ ತೊಂದರೆ ಆತಂಕ ನಿಸ್ಸಹಾಯಕ ಜನ ಸಮೂಹ ಇದ್ದೇ ಇರುತ್ತದೆ ಅಂತವರನ್ನು ಗುರುತಿಸಿ , ಸೇವೆ ನೀಡುವುದು ಬಹಳ ಮುಖ್ಯವಾಗಿದೆ ಎಂದು ರೊಟೇರಿಯನ್ ಪಿ.ಎಚ್.ಎಫ್. ವಿ. ತಿರುಪತಿ ನಾಯ್ಡು** (ಹೊಸಪೇಟೆ) ಮಾನಾಡಿದರು. ಶ್ರೀ ಚನ್ನಬಸವ ಸ್ವಾಮಿ ಕಲ್ಯಾಣ ಮಂಟಪದಲ್ಲಿ 6 ಜುಲೈ 2025ರಂದು ನಡೆದ ಗಂಗಾವತಿ ರೊಟರಿ ಕ್ಲಬ್ ಇನ್ಸ್ತ್ರಲೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ರೊಟರಿಯ ಸೇವಾ ಯೋಜನೆಗಳು ಮೇಲುಕು ಹಾಕುತ್ತಾ - "ಪೋಲಿಯೋ ನಿರ್ಮೂಲನೆಗೆ ರೊಟರಿ ಮಾಡಿದ ಸೇವೆ ಉದಾಹರಣೆಯಾಗಿದೆ ಮತ್ತು ಗಂಗಾವತಿ ರೋಟರಿ ಕ್ಲಬ್ ಶಾಶ್ವತ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲಿ ಶಿಕ್ಷಣ, ಆರೋಗ್ಯ ಸೌಲಭ್ಯ ಅಗತ್ಯ," ಎಂದರು ಮತ್ತು ಗಂಗಾವತಿ ರೊಟರಿ ಕ್ಲಬ್ಗೆ 7 ಹೊಸ ಸದಸ್ಯರು ಸೇರಿದ್ದು, ಒಳ್ಳೆಯ ಬೆಳವಣಿಗೆ ಎಂದು ಅವ್ಹಾನಿಸಿದರು ನೂತನ ಅಧ್ಯಕ್ಷ ಅಧ್ಯಕ್ಷ ಜಗದೀಶ್ ಅಂಗಡಿ ಮಾತನಾಡಿ"ಸೇವೆಯೇ ಪುಣ್ಯಕಾರ್ಯ; ಇತರರಿಗೆ ಸಹಾಯ ಮಾಡುವದರಲ್ಲಿರುವ ಆನಂದ ಬೇರೊಂದರಿಲ್ಲ ನಮಗೆಲ್ಲ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಾರ್ಯಪ್ರವೃತ್ತರಾಗುತ್ತೇವೆ ಎಂದರು 2024-25ರ ಅಧ್ಯಕ್ಷ ಟಿ. ಆಂಜನೇಯ ಅವರು *"ಆರೋಗ್ಯ ಶಿಬಿರಗಳು, ಪರಿಸರ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಂಚಿಕೊಂಡರು. ಇವೇಳಿ ಮುಖ್ಯ ಅತಿಥಿಯಾಗಿ ಆಗಮಿ...