Posts

Showing posts from December, 2024

ಗಂಗಾನದಿ ಮಾದರಿಯಲ್ಲಿ ತುಂಗಭದ್ರಾ ನದಿ ಸ್ವಚ್ಛವಾಗಲಿ: ಲಲಿತಾರಾಣಿ

Image
ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ  ಅಂಜನಾದ್ರಿಯಲ್ಲಿ ಚಾಲನೆ. ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ: ತುಂಗಭದ್ರಾ ನದಿಯ ಮಲೀನತೆಯಿಂದಾಗಿ ನದಿ ನೀರು ಕುಡಿಯಲು ಮಾತ್ರವಲ್ಲ, ಬಳಸಲು ಕೂಡ ಯೋಗ್ಯವಿಲ್ಲದಂತಾಗಿದೆ. ಇದು ಹೀಗೆ ಮುಂದುವರೆದರೆ ನಮ್ಮ ಮಕ್ಕಳಿಗೆ ಮುಂದಿನ ತಲೆಮಾರಿನ ಭವಿಷ್ಯವಿಲ್ಲದಂತಾಗುತ್ತದೆ.  ಗಂಗಾನದಿ ಮಾದರಿಯಲ್ಲಿ ತುಂಗಭದ್ರಾ ನದಿ ಸ್ವಚ್ಛವಾಗಲಿ ಎಂದು ರಾಜಮಾತೆ ಲಲಿತಾರಾಣಿಯವರು ಅಭಿಪ್ರಾಯಪಟ್ಟರು. ಅವರು ಡಿ.೩೧ರಂದು ಅಂಜನಾದ್ರಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು ಎರಡು-ಮೂರು ದಶಕಗಳಿಂದಲೂ ತುಂಗಭದ್ರಾ ನದಿಯ ನೀರನ್ನು ನಾವೆಲ್ಲರೂ ಕುಡಿಯುತ್ತಿದ್ದೇವೆ. ಆದರೆ ನದಿಯ ನೀರು ಮಲೀನತೆಯಾಗುತ್ತಿರುವುದರಿಂದ ನಮ್ಮ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶುದ್ದ ನೀರು, ಸ್ವಚ್ಛ ಗಾಳಿ ಪರಿಸರವನ್ನ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ತಂಡ ಶೃಂಗೇರಿಯಿAದ ಕಿಷ್ಕಿಂದೆವರೆಗೂ ಪಾದಯಾತ್ರೆ ಬಂದಿರುವುದು ಅತ್ಯಂತ ಸಾರ್ಥಕ ಕಾರ್ಯವಾಗಿದೆ. ಪಾದಯಾತ್ರೆಯ ಸಂಘಟಕರಿಗೆ ನಮ್ಮೂರಿನ ಎಲ್ಲರ ಪರವಾಗಿ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಈ ಪಾದಯಾತ್ರೆ ತಂಡದೊAದಿಗೆ ಹುಲಿಗಿಯಿಂದ ಗಂಗಾವತಿಯವರೆಗೂ ಎಲ್ಲ ನಾಗರಿಕರು ಸಂಘ-ಸAಸ್ಥೆಗಳು ಎಲ್ಲರೂ ಪಾದಯಾತ್ರೆಯಲ್ಲಿ ಭಾಗಿಯಾಗಿ ಪಾದಯಾತ್ರೆಯನ್ನು ...

ನಿರ್ಮಲ ತುಂಗಭದ್ರ ಅಭಿಯಾನದ ಜಲಜಾಗೃತಿ ಗಂಗಾವತಿಯಲ್ಲಿ ಪಾದಯಾತ್ರೆ ಮತ್ತು ಸಮಾರೋಪ 2025ಜನೆವರಿ-೦೮ ಕ್ಕೆ ಮುಂದೂಡಿಕೆ

Image
  ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್‌ರವರ ನಿಧನದ ಹಿನ್ನೆಲೆ ಡಿಸೆಂಬರ್-೩೦ ರ ಹಿನ್ನೆಲೆ  ನಿರ್ಮಲ ತುಂಗಭದ್ರಾ ಅಭಿಯಾನದ  ಜಲಜಾಗೃತಿ ಮತ್ತು ಜನಜಾಗೃತಿ ಪಾದಯಾತ್ರೆ ಮತ್ತು  ಸಮಾರೋಪ ಜನೇವರಿ-೦೮ ಕ್ಕೆ ಮುಂದೂಡಿಕೆ ಗAಗಾವತಿ: ನಿರ್ಮಲ ತುಂಗಭದ್ರಾ ಅಭಿಯಾನದ ಜಲಜಾಗೃತಿ ಮತ್ತು ಜನಜಾಗೃತಿ ಪಾದಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮವು ಡಿಸೆಂಬರ್-೩೦ ಕ್ಕೆ ನಿಗದಿಯಾಗಿತ್ತು. ಆದರೆ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್‌ರವರ ನಿಧನದ ನಿಮಿತ್ಯ ಸದರಿ ಕಾರ್ಯಕ್ರಮವನ್ನು ಮುಂದಿನ ತಿಂಗಳು ಅಂದರೆ ಜನೇವರಿ-೦೮ಕ್ಕೆ ಮುಂದೂಡಲಾಗಿದೆ ಎಂದು ಅಭಿಯಾನದ ರಾಷ್ಟಿçÃಯ ಸಂಚಾಲಕರಾದ ಬಸವರಾಜ ಪಾಟೀಲ್ ವೀರಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನೇವರಿ-೦೭ ರಂದು ಅಭಿಯಾನದ ಪಾದಯಾತ್ರೆಯು ಕೊಪ್ಪಳ ಜಿಲ್ಲೆ ಪ್ರವೇಶಿಸಲಿದ್ದು, ಜನೇವರಿ-೦೮ ರಂದು ಗಂಗಾವತಿ ನಗರದಲ್ಲಿ ಜಲಜಾಗೃತಿ, ಜನಜಾಗೃತಿ ಹಾಗೂ ಸಮಾರೋಪ ಕಾರ್ಯಕ್ರಮ ಜರುಗಲಿದೆ. ಈ ಅಭಿಯಾನದ ಕುರಿತು ಮಹತ್ವದ ಪೂರ್ವಭಾವಿ ಸಭೆಯನ್ನು ಡಿಸೆಂಬರ್-೨೯ ರವಿವಾರ ಸಾಯಂಕಾಲ ೪:೦೦ ಗಂಟೆಗೆ ಗಂಗಾವತಿ ನಗರದ ಐ.ಎಂ.ಎ ಭವನದಲ್ಲಿ ಕರೆಯಲಾಗಿದೆ. ಈ ಸಭೆಗೆ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು, ಎಲ್ಲಾ ಸಮಾಜಗಳ ಹಿರಿಯ ಮುಖಂಡರು, ರೈತ ಮುಖಂಡರು, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತರು, ಹೋರಾಟಗಾರರು ಹಾಗೂ ಮಹಿಳಾ ಪ್ರತಿನಿಧಿಗಳು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

ಶ್ರೀಗುರು ಪುಟ್ಟರಾಜ ಗವಾಯಿಗಳ ಶಾಲೆಯಲ್ಲಿ ಕಡಿಮೆ ಶುಲ್ಕದೊಂದಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ: ಹಿರಿಯ ನ್ಯಾಯವಾದಿ ಮಹಾಬಳೇಶ್ವರ ಹಾಸಿನಾಳ:

Image
  ಶ್ರೀಗುರು ಪುಟ್ಟರಾಜ ಗವಾಯಿಗಳ ಶಾಲೆಯಲ್ಲಿ ಕಡಿಮೆ ಶುಲ್ಕದೊಂದಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ:  ಹಿರಿಯ ನ್ಯಾಯವಾದಿ ಮಹಾಬಳೇಶ್ವರ ಹಾಸಿನಾಳ: ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ ........................ ಸಂಗೀತದಿಂದ ಸಾಕ್ಷಾತ್ ಭಗವಂತನನ್ನು ಕಾಣಬಹುದಂತೆ. ಸಂಗೀತವೇ  ದೇವರೆಂದು ನಂಬಿ , ಕಣ್ಣಿಲ್ಲದ ಮತ್ತು ಸಂಗೀತ ಆರಾಧಕರ ಬದುಕಿಗೆ ಬೆಳಕಾದ ಶ್ರೀ ಗುರುಪುಟ್ಟರಾಜ ಗವಾಯಿಗಳ ಹೆಸರನ್ನು ಹೊಂದಿರುವ ಶಾಲೆಯಲ್ಲಿ   ಕಡಿಮೆ ಶುಲ್ಕದೊಂದಿಗೆ ಉತ್ತಮ ಶಿಕ್ಷಣವಿದೆ.  ಸಂಸ್ಥೆ ಹಣಕ್ಕಾಗಿ ಸೇವೆ ನೀಡುತ್ತಿಲ್ಲ. ಮಕ್ಕಳ ಬದುಕು ಉಜ್ವಲವಾಗಲಿ ಎಂದು ಸರ್ವ ಆಡಳಿತ ಮಂಡಳಿ ಸೇವೆ ನೀಡುತ್ತಿದೆ. ಮತ್ತು ಮಕ್ಕಳನ್ನು ಶಾಲೆ ಬಿಡಿಸದೆ ಮಾರ್ಗದರ್ಶನ ಮಾಡಿ ಸಂಸ್ಕಾರದೊಂದಿಗೆ ಶಿಕ್ಷಣಕೊಡಿಸಿ . ವಿದ್ಯಾರ್ಥಿಗಳು ಕೂಡ ನೀವು ಕಲಿತ ಈ ಶಾಲೆಯನ್ನು  ಮರೆಯಬಾರದು . ಮುಸ್ಲೀಮ್ ಬಾಂಧವರು  ಮತ್ತು ಎಲ್ಲ ವರ್ಗದ ಪಾಲಕರು ಮಕ್ಕಳನ್ನು ಶಾಲೆಯಿಂದ ಬೇಗನೆ  ವಿಮುಕ್ತಿಗೊಳಿಸದೇ ಗ್ಯಾರೇಜ್ ಅಥವಾ ಕೂಲಿಕೆಲಸಗಳಿಗೆ ಹಚ್ಚಿ ಅವರ ಭವಿಷ್ಯ ಕುಂಟಿತ ಮಾಡದೇ ಉನ್ನತ ಶಿಕ್ಷಣ ಪಡೆಯಲು ಪಾಲಕರ ಸಹಕಾರ ಅವಶ್ಯ   ಶಾಲೆಯ ಮುಖ್ಯಸ್ಥರಾದ ಪದ್ಮಾರೇಖಾರವರ ಕಾರ್ಯಕ್ಷಮತೆಯಿಂದ  ಈ ಶಾಲೆ‌ ಹೆಸರು ಮಾಡಿದೆ ಮತ್ತಷ್ಟು  ಸೇವೆ ನೀಡಲಿದೆ . ಪಾಲಕರ ಸಹಕಾರವೂ ಅಷ್ಟೇ ಮುಖ್ಯ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು....

ಹಣವಾಳ ಶಾಲೆಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಜಾಗೃತಿ ಕಾರ್ಯಕ್ರಮ

Image
ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ .................................  ಡಿ.13 ಶುಕ್ರವಾರರಂದು ನಿರ್ಮಲ ತುಂಗಭದ್ರಾ ಅಭಿಯಾನ ಕುರಿತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಣವಾಳದಲ್ಲಿ ಪ್ರಾರ್ಥನಾ ಸಮಯದಲ್ಲಿ  ನಿರ್ಮಲ ತುಂಗಭದ್ರಾ  ಅಭಿಯಾನದಡಿಯಲ್ಲಿ  ವಿದ್ಯಾರ್ಥಿಗಳಿಗೆ  ಕನ್ನಡ ನಾಡು ನುಡಿ, ಜಲಮೂಲ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್  ತ್ಯಾಜ್ಯ    ಕುರಿತು  ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು . ಈ ಸಮಯದಲ್ಲಿ  ಶಿಕ್ಷಕರಾದ ರತ್ನಾ  ಕೊಟ್ರಶೆಟ್ಟಿ, ಮೇನಕಾ, ಶರಣಪ್ಪ, ಮೈಲಾರಪ್ಪ ಬೂದಿಹಾಳ ಮತ್ತು  ಅತಿಥಿ ಶಿಕ್ಷಕರು   ಹಾಜರಿದ್ದರು.