*ಚಿಗುರು ಚೈತನ್ಯ ಶಿಬಿರದ ಪಾಲಕರ ಸಭೆ ಯಶಸ್ವಿ : ಏಪ್ರಿಲ್ 5 ಸೋಮವಾರದಿಂದ ಶಿಬಿರ ಪ್ರಾರಂಭ

**ಸೋಮವಾರ, 5 ಎಪ್ರಿಲ್ 2025** – ಮಕ್ಕಳಿಗಾಗಿ ಏರ್ಪಡಿಸಲಾಗಿರುವ **15-ದಿನಗಳ ಚಿಗುರು ಚೈತನ್ಯ ಶಿಬಿರ** ಪ್ರಾರಂಭವಾಗಲಿದೆ. ಈ ನಿಟ್ಟಿನಲ್ಲಿ ಮೊನ್ನೆ ನಡೆದ **ಪಾಲಕರ ಸಭೆ** ಯಲ್ಲಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ**ಶ್ರೀ ಚನ್ನಬಸವ ಸ್ವಾಮಿ ಟ್ರಸ್ಟ್ ಕಮಿಟಿಯ ಹಿರಿಯ ಸದಸ್ಯ ಕೆ. ಚನ್ನಬಸಯ್ಯ ಸ್ವಾಮಿ ಮಾತನಾಡುತ್ತಾ,, ಮಕ್ಕಳು ಸದಾ ಬೆಳೆಯುವ ಚಿಗುರಿನಂತೆ ಚೈತನ್ಯವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಈ ಎರಡನೇ ವರ್ಷದ **ಚಿಗುರು ಚೈತನ್ಯ ಶಿಬಿರ** ಏರ್ಪಡಿಸಲಾಗಿದೆ ಎಂದು ತಿಳಿಸಿದರು. * *ಪಠ್ಯ ಚಟುವಟಿಕೆಗಳನ್ನು ಹೊರತು ಪಡಿಸಿ, ಸಹಕಾರ ಮನೋಭಾವ, ಪಾಲಕರು, ಗುರು-ಹಿರಿಯರಿಗೆ ಗೌರವ, ಸ್ನೇಹಿತರು ಮತ್ತು ಸಮುದಾಯದೊಂದಿಗಿನ ಸಂವಹನ** ಮುಂತಾದ ಜೀವನಮೌಲ್ಯಗಳನ್ನು ಈ ಶಿಬಿರದಲ್ಲಿ ಕಲಿಸಲಾಗುವುದು. 15 ದಿನಗಳಲ್ಲಿ **ಸೇವಾ ಮನೋಭಾವ, ನೈತಿಕ ಬೆಳವಣಿಗೆ** ಮತ್ತು **ಸಮಾಜೋನ್ನತಿ**ಗೆ ಅಗತ್ಯವಾದ ಪಾಠಗಳನ್ನು ಮಕ್ಕಳಿಗೆ ನೀಡಲಾಗುವುದು. ಪಾಲಕರು ಮತ್ತು ಮಕ್ಕಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ರು ನಂತರ, **ಇತಿಹಾಸ ತಜ್ಞ ಶರಣಬಸಪ್ಪ ಕೊಲ್ಕಾರ** ಅವರು ಮಾತನಾಡುತ್ತಾ, *"ಇಂದಿನ ಮಕ್ಕಳು ಶಾಲೆ, ಮನೆಗಳಲ್ಲಿ ಒತ್ತಡದಲ್ಲಿದ್ದಾರೆ. ಅವರ ಬಾಲ್ಯವನ್ನು ನಾವು ಕಸಿದುಕೊಂಡಂತಾಗಿದೆ. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಕ್ಕಳೊಂದಿಗೆ ತೊಡಗಿಸಿಕೊಂಡು, ಅವರ ಕೊರತೆಗಳನ್ನು ನೀಗಿಸಲಿದ್ದಾರೆ"* ಎಂದರು. *ಬಿ.ಸಿ. ಐಗೊಳ್* ಅವರು ಶಿಬಿರದ ವಿವರಗಳನ್ನು ಹಂಚಿಕೊಂಡು, *"ಯೋಗ, ಚಿತ್ರಕಲೆ, ಆದರ್ಶ ಕಥೆಗಳು ಮತ್ತು ಇತರ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಶಾಲೆಯಲ್ಲಿ ಅರ್ಥವಾಗದ ವಿಷಯಗಳನ್ನು ಸರಳವಾಗಿ ಕಲಿಸಲಾಗುವುದು. ಇದರಿಂದ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯುವರು"* ಎಂದರು. ಈ ಸಂದರ್ಭದಲ್ಲಿ, **ಸಂಪನ್ಮೂಲ ವ್ಯಕ್ತಿಗಳಾದ ಮೈಲಾರಪ್ಪ ಬೂದಿಹಾಳ, ಶಿವಪ್ರಸಾದ್ ಹಿರೇಮಠ್, ಶಿವಾನಂದ ತಿಮ್ಮಾಪುರ* ಶಿಕ್ಷಕಿ ನಾಗರತ್ನ, ಈರಮ್ಮ, ಯೋಗಗುರು ಗಂಧದಮಠ, ವಗ್ಗ ಮೇಡಂ, ಮುಂತಾದವರು ಹಾಗೂ **60ಕ್ಕೂ ಹೆಚ್ಚು ಪಾಲಕರು** ಉಪಸ್ಥಿತರಿದ್ದರು. ಈ ಶಿಬಿರದಿಂದ ಮಕ್ಕಳು **ನೈತಿಕ, ಸಾಮಾಜಿಕ ಮತ್ತು ಬೌದ್ಧಿಕವಾಗಿ** ಸಮೃದ್ಧರಾಗುತ್ತಾರೆ ಎಂಬ ನಂಬಿಕೆ ಹಂಚಿಕೊಳ್ಳಲಾಯಿತು.

Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*