*ಗಂಗಾವತಿಯಲ್ಲಿ ಬಕ್ರೀದ್ ಹಬ್ಬ ಶಾಂತಿಯಿಂದ ಆಚರಿಸಲು ಶಾಂತಿ ಸಭೆ**
**ಗಂಗಾವತಿ, [ತಾರೀಖ31-05-2025ು.. :]:** ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವ ಸಲುವಾಗಿ ಗಂಗಾವತಿ ನಗರದ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಇಂದು ನಡೆಯಿತು .
ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಅವರು, *"ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಲ್ಲರೂ ಶಾಂತಿಯಿಂದ ಹಬ್ಬವನ್ನು ಆಚರಿಸಬೇಕು. ಹಿಂದೂ-ಮುಸ್ಲಿಂ ಸಮುದಾಯಗಳು ಒಗ್ಗಟ್ಟಿನಿಂದಿರಬೇಕು. ಶಾಂತಿಗೆ ಭಂಗ ತರುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗುವುದು"* ಎಂದು ಹೇಳಿದರು.
ಈ ಸಂದರ್ಭದಲ್ಲಿ, ಗಂಗಾವತಿ ನಗರ ಠಾಣೆಯ ಪಿಐ ಪ್ರಕಾಶ್ ಮಾಳಿ, ಪಿಎಸ್ಐ ಟಿ.ನಾಗರಾಜ್, ಜೋಗದ ಹನುಮಂತಪ್ಪ ನಾಯಕ, ಸಮಾಜಸೇವಕರು ಎಸ್.ಬಿ.ಖಾದ್ರಿ, ನಗರಸಭೆ ಸದಸ್ಯ ಖಾಸೀಂಸಾಬ್ ಗದ್ವಾಲ್, ಫಕೀರಪ್ಪ ದಳಪತಿ, ಮೀರಸಾಬ್ ವಡ್ಡರಹಟ್ಟಿ, ನಜೀರ್ ಸಾಬ್, ಖಮರಸಾಬ್ ಹಿರೇಜಂತಕಲ್, ಹೊನ್ನೂರ ಸಾಬ್ ಹಿರೇಜಂತಕಲ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಸೌಹಾರ್ದ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಈ ಸಭೆಯಲ್ಲಿ ಎತ್ತಿ ಹೇಳಲಾಯಿತು
Comments
Post a Comment