ನ್ಯಾಯ ಸಿಗದಿದ್ದರೆ, ನಗರಸಭೆಯ ಆವರಣದ ಮುಂದೆ ಕುಟುಂಬಸಮೇತ ಅನಿರ್ದಿಷ್ಟ ಕಾಲ ಉಪವಾಸ :ರಮೇಶ್ ನಾಯಕ

Kishkindha prabha ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ನೀಡಲು ನಗರಸಭೆಯ ಪೌರಾಯುಕ್ತರ ನಿರಾಕರಣೆ... ಗಂಗಾವತಿ: ಮಾಹಿತಿ ಹಕ್ಕು (RTI) ಅಧಿನಿಯಮದ ಅಡಿಯಲ್ಲಿ, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯ ಸರ್ವೆ ನಂಬರ್ 46/2 ಮತ್ತು 46/3 ಭೂಮಿಗೆ ಸಂಬಂಧಿಸಿದಂತೆ ಗೃಹ ನಿವೇಶನಕ್ಕಾಗಿ ಅನುಮೋದನೆ ಪಡೆಯಲು ಸಂಪೂರ್ಣ ದಾಖಲೆಗಳು, ವಿನ್ಯಾಸ ಪ್ರತಿಗಳು, ಆದೇಶಗಳ ನಕಲುಗಳು ಮತ್ತು ಇತರ ದೃಢೀಕೃತ ದಾಖಲಾತಿಗಳನ್ನು ನೀಡುವಂತೆ ನಗರಸಭೆಯ ಪೌರಾಯುಕ್ತರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಇದುವರೆಗೂ ಯಾವುದೇ ಮಾಹಿತಿಯನ್ನು ನೀಡದಿರುವುದು ಗಂಭೀರವಾದ ಆರೋಪಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಜೋಗಿನ ರಮೇಶ್ ನಾಯಕ್ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. *"ಪೌರಾಯುಕ್ತರು ಮತ್ತು ಅಧಿಕಾರಿಗಳು ಉದ್ಯಮಿಗಳೊಂದಿಗೆ ಕೈಜೋಡಿಸಿರುವುದು ಸ್ಪಷ್ಟವಾಗುತ್ತದೆ"* ಎಂದು ದೂರಿದ್ದಾನೆ ಸರ್ವೆ ನಂಬರ್ 46/2 ಮತ್ತು 46/3 ರ ಭೂಮಿಯು ತಮ್ಮ ವೈಯಕ್ತಿಕ ಸ್ವತ್ತಾಗಿದ್ದು, ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ತಮ್ಮ ಅರ್ಜಿಗೆ ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ಮಾಹಿತಿ ನೀಡುವಂತೆ ಮೌಖಿಕ ಆದೇಶ ನೀಡಿದ್ದರೂ, ನಗರಸಭೆಯು ಈ ಆದೇಶವನ್ನು ಧಿಕ್ಕರಿಸಿ ನಿರಂಕುಶವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾನೆ. ಈ ವಿಷಯದಲ್ಲಿ ನ್ಯಾಯ ಸಿಗದಿದ್ದರೆ, ನಗರಸಭೆಯ ಆವರಣದ ಮುಂದೆ ತಾವು ತಮ್ಮ ಕುಟುಂಬಸಮೇತ ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ಮಾಡಲು ತಯಾರಾಗಿದ್ದಾರೆ ಎಂದು ರಮೇಶ್ ನಾಯಕ್ ಮಾಧ್ಯಮಗಳ ಮುಂದೆ ತಮ್ಮ ಕೋಪ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾನೆ

Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*